ಶ್ರೀ ಸೀತಾಭೈರವೇಶ್ವರ ಪ್ರೊಡಷನ್ಸ್ ಲಾಂಛನದಡಿಯಲ್ಲಿ ಡಿ. ಸುರೇಶ ಗೌಡ, ಪಿ.ಎಸ್. ಶ್ರೀನಿವಾಸ ಮೂರ್ತಿ ನಿರ್ಮಿಸುತ್ತಿರುವ ಅದ್ದೂರಿ ವೆಚ್ಚದ ಅದ್ದೂರಿ ತಾರಾಗಣದ ಬೃಂದಾವನ ಚಿತ್ರದ ಚಿತ್ರೀಕರಣವು ಇದೀಗ ಬಹುತೇಕ ಸಂಪೂರ್ಣಗೊಂಡಿದೆ. ಚಿತ್ರಕ್ಕಾಗಿ ಇತ್ತೀಚೆಗೆ ೧೫ ದಿನಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್, ಕಾರ್ತಿಕಾ ನಾಯಕ್, ಅಜಯ್, ಗೀತಾ, ಶರತ್ ಬಾಬು ಮುಂತಾದವರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಬೆಂಗಳೂರು ಮೈಸೂರು ಸುತ್ತ ಮುತ್ತ ಹಾಗೂ ದರ್ಶನ್, ಅಜಯ್ ಹಾಗೂ ೧೦೦ ಹೆಚ್ಚು ಸಹ ಕಲಾವಿದರೂ ಭಾಗವಹಿಸಿದ ಹೊಡೆದಾಟದ ಸನ್ನಿವೇಶವನ್ನು ಕಿರುಗಾವಲಿನಲ್ಲಿ ಪಳನಿರಾಜ್ ಸಾಹಸ ನಿರ್ದೇಶನದೊಂದಿಗೆ ರಮೇಶ್ ಬಾಬು ಛಾಯಾಗ್ರಹಣದಲ್ಲಿ ನಿರ್ದೇಶನ ಮಾದೇಶ್ ಚಿತ್ರಿಸಿಕೊಂಡನು.
ಚಿತ್ರಕ್ಕೆ ೩ ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು ಒಂದು ಗೀತೆಯನ್ನು ಸಕಲೇಶಪುರದಲ್ಲೂ ಹಾಗೂ ಮತ್ತೆರಡು ಗೀತೆಗಳನ್ನು ವಿದೇಶದಲ್ಲೂ ಸದ್ಯದಲ್ಲೇ ಚಿತ್ರೀಕರಿಸಿಕೊಳ್ಳಲಾಗುವುದು ಎಂದು ತಿಳಿಸಿರುವ ನಿರ್ಮಾಪಕರು ಚಿತ್ರವು ಸೆಪ್ಟೆಂಬರ್ ಅಂತ್ಯದಲ್ಲಿ ತೆರೆಕಾಣಲಿದೆ ಎಂದು ತಿಳಿಸಿದ್ದಾರೆ.
ಚಿತ್ರಕ್ಕೆ ಕೆ.ವಿ. ರಾಜು ಸಂಭಾಷಣೆ, ಹರಿಕೃಷ್ಣ ಸಂಗೀತ, ಕವಿರಾಜ್ ನಾಗೇಂದ್ರ ಪ್ರಸಾದ್ ಸಾಹಿತ್ಯ, ರಮೇಶ್ಬಾಬು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ, ಗಣೇಶ್ (ಹೈದರಾಬಾದ್) ನೃತ್ಯ, ಲಿಂಗರಾಜು ನಿರ್ದೇಶನ ಸಹಕಾರ, ಸುಂದರರಾಜ್ ನಿರ್ಮಾಣ ಮೇಲ್ವಿಚಾರಣೆ, ಗಗನ್ಮೂರ್ತಿ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಕೆ. ಮಾದೇಶ್.
ತಾರಾಗಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾರ್ತಿಕಾ ನಾಯರ್, ಮಿಲನ, ಗೀತಾ, ಶರತ್ಬಾಬು, ಸಾಯಿಕುಮಾರ್, ನಿರೋಷ, ಜೈಜಗದೀಶ್, ಸಂಗೀತ, ಸಾಧು ಕೋಕಿಲ, ಮೋಹನ್ ಜುನೇಜಾ, ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್, ಶೋಭಾ, ಜಾನ್ ಕೋಕೈನ್, ಅಜಯ್ ಹೈದರಾಬಾದ್, ಪ್ರಕಾಶ್ ಹೆಗ್ಗೋಡು, ಕುರಿ ಪ್ರತಾಪ, ವೀಣಾ ಸುಂದರ್, ಕಿಲ್ಲರ್ ವೆಂಕಟೇಶ್ ಮುಂತಾದವರಿದ್ದಾರೆ.